ಕೋಲಾರ: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಕಮಲದಲ್ಲಿ ಬಣ ಬಡಿದಾಟ ಜೋರಾಗಿದೆ. ರಾಜ್ಯ ಬಿಜೆಪಿಯಲ್ಲಿ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಈಗಾಗಲೇ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವರಿಷ್ಠರಿಗೆ ಒಂದು ಗುಂಪಿನಿಂದ ದೂರುಗಳನ್ನು ನೀಡಿದ್ದಾರೆ.
ಹಾಲಿ ಶಾಸಕರ ,ಸಚಿವರ,ಸಂಸದರನ್ನು ಕಡೆಗಾಣಿಸುತ್ತಿರುವ ವಿಜಯೇಂದ್ರ ನಡೆ ಬಗ್ಗೆ ಅಸಮದಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಈ ಗಾಗಲೇ ಶಾಸಕ ಬಸವಗೌಡ ಪಾಟೀಲ ಯತ್ನಾಳ ಮುಂದಿನ ಬಿಜೆಪಿಯ ರಾಜ್ಯಾಧ್ಯಕ್ಷ ನಾನೇ ಎಂದು ಬಿಂಬಿಸುತ್ತಿದ್ದಾರೆ. ಇತ್ತಹಿಂದುಳಿದ , ಅಹಿಂದ ವರ್ಗಗಳಿಗೆ ಅವಕಾಶ ಕಲ್ಪಿಸಿದ್ದರೆ ಆದ್ರೆ ವಾಲ್ಮೀಕಿ ಸಮೂದಾಯದ ಮಾಜಿ ಸಚಿವ ಶ್ರೀರಾಮುಲು ಹಿರಿಯ ನಾಯಕರು ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಬಹುದು ಎಂದು ಬಸವನಗೌಡ ಪಾಟೀಲ್ ಯತ್ನಾಳ ಹಲವು ಕಡೆ ತಿಳಿಸಿದ್ದಾರೆ ಎಂದು ಕೋಲಾರದಲ್ಲಿ ಮಾಜಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಶ್ರೀರಾಮುಲು ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಬಿವೈ ವಿಜಯೇಂದ್ರ ಸಮರ್ಥರಿದ್ದಾರೆ. ಹಾಗೇ ಅವರ ಅಪ್ಪಾ ಮಾಜಿ ಮುಖ್ಯಮಂತ್ರಿ ಬಿಎಸ್ ಯಡೆಯೂರಪ್ಪ ತಳ ಮಟ್ಟದಿಂದ ಬಿಜೆಪಿ ಸಂಘಟನೆ ಕಟ್ಟಿದವರು ಅವರು ದಕ್ಷಣ ಭಾರತದ ಭೀಷ್ಮ ಎಂದೇ ಕರೆಯುತ್ತಾರೆ. ಅವರ ಸಂಘಟನಾ ಮನೋಭಾವದಂತೆ ಅವರ ಮಗ ವಿಜಯೇಂದ್ರ ಸಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರ ಅಧ್ಯಕ್ಷತೆ ಬಗ್ಗೆ ತಮಗೇನು ತಕರಾರು ಇಲ್ಲ.
ರಾಜ್ಯದಲ್ಲಿ ಬಿಜೆಪಿ ಪಕ್ಷದ ವಿದ್ಯಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳು ನೋಡಿದ್ರೆ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಅಸಮದಾನ ಹಲವರು ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಒಂದು ಕುಟುಂಬಕ್ಕೆ ಸೀಮಿತವಾಗಬಾರದು ಎಂದು ಯತ್ನಾಳ ವಾದವಾಗಿದೆ. ಇದು ಏನೇ ಇರಲಿ ದಕ್ಷಣ ಭಾರದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ತಂದ ಯಡೆಯೂರಪ್ಪ ಬಗ್ಗೆ ಆಪಾರ ಗೌರವವಿದೆ. ಈ ಎಲ್ಲ ಬೆಳವಣಿಗೆ ಬಗ್ಗೆ ಯಾವ ರೀತಿ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂಬುದು ಕಾದು ನೋಡಬೇಕಿದೆ.
ಹಾಗೇನಾದ್ರೂ ಒಂದು ವೇಳೆ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಬದಲಾಯಿಸು ಹಂತಕ್ಕೆ ಬಂದ್ರೆ , ದಲಿತ ,ಅಹಿಂದ,ವರ್ಗಗಳಿಗೆ ಅಧ್ಯಕ್ಷ ಸ್ಥಾನದ ಅವಕಾಶ ಸಿಕ್ಕರೆ ತಾನು ಅಧ್ಯಕ್ಷ ನಾಗಲು ಬಯಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪಕ್ಷದಲ್ಲಿ ಹಿರಿಯವನಿದ್ದೀನಿ ,ರಾಜ್ಯ ಎಲ್ಲ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮಾಡಿ ಕೊಂಡು ಬಂದಿದ್ದೂ ಸಾಕಷ್ಟು ಅನುಭವವನ್ನು ಹೊಂದಿದ್ದೇನೆ ರಾಜ್ಯಧ್ಯಕ್ಷರ ಸ್ಥಾನ ನೀಡಿದರೆ ತಾನೊ ನಿಬಾಯಿಸುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಕೋಲಾರದಲ್ಲಿ ತಿಳಿಸಿದ್ದಾರೆ.
ಕೋಲಾರ ಖಾಸಗಿ ಬೇಟಿ ವೇಳೆ ಮಾಧ್ಯಮಗಳ ಜೊತೆ ಗೆ ಮಾತನಾಡಿದ ಶ್ರೀರಾಮುಲು ಬಿಜೆಪಿ ಆಗುತ್ತಿರುವ ಆಂತರಿಕ ಅಸಮಾದಾನಕ್ಕೆ ಶೀಘ್ರದಲ್ಲಿಯೇ ವರಿಷ್ಠರು ಸರಿಪಡಿಸಲಿದ್ದಾರೆ ಎಂದು ತಿಳಿಸಿದರು. ಇದೇವೇಳೆ ಜನಾರ್ಧನರೆಡ್ಡಿ ವಿಚಾರ ಬಗ್ಗೆ ಮಾತನಾಡಿದ ಶ್ರೀರಾಮುಲು ರಾಜಕೀಯ ತೆವಲಿಗಾಗಿ ತಮ್ಮ ಮೇಲೆ ಅರೋಪ ಮಾಡುವುದಲ್ಲ. ನಾನು ಏನೇ ಎಂದು ಬಳ್ಳಾರಿ ಜನತೆಗೆ ತಿಳಿದಿದೆ..ಕಾಲವೇ ಉತ್ತರಿಸುತ್ತದೆ ಎಂದರು.
ಇದೇ ಸಂಧಭದಲ್ಲಿ ಕೋಲಾರ ನೂತನ ಬಿಜೆಪಿ ಅಧ್ಯಕ್ಷ ಓಶಕ್ತಿ ಚಲಪತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ರೂಪ,ಮಂಜುನಾಥ್ ,ಇತರೆ ಬಿಜೆಪಿ ಮುಖಂಡರು ಕಾರ್ಯಕರ್ತರು,ವಾಲ್ಮೀಕಿ ಸಮೂದಾಯ ಮುಖಂಡರು ಹಾಜರಿದ್ದರು.
